ಮಂಗಳವಾರ, ಫೆಬ್ರವರಿ 8, 2011

"ಪರೀಕ್ಷಾ ಗುಮ್ಮ" - ಎದುರಿಸುವುದು ಹೇಗೆ?


ಜನವರಿ, ಫೆಬ್ರವರಿ ಪ್ರಾರಂಭವಾಯಿತೆಂದರೆ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಗುಮ್ಮ ಸವಾರಿಮಾಡತೊಡಗುತ್ತದೆ. ವರ್ಷವಿಡೀ ಆಟ, ಟೀವಿ, ಸಿನಿಮಾ, ಮೊಬೈಲ್, ಫೇಸ್ ಬುಕ್ ಮೊದಲಾದವುಗಳಲ್ಲಿ ತೊಡಗಿಕೊಂಡಿದ್ದ ವಿದ್ಯಾರ್ಥಿಗಳು ಎಚ್ಹರವಾಗುವುದೇ ಜನವರಿ ಬಂದಾಗ. ಒಂದೆಡೆ "ಓದುವುದು ತುಂಬಾ ಇದೆ. ಹೇಗೆ ಓದಲಿ" ಎಂಬ ಭಯ. ಇನ್ನೊಂದೆಡೆ "ಇಷ್ಟು ದಿನ ಕಾಲಹರಣ ಮಾಡಿದೆ" ಅನ್ನುವ ಪಶ್ಚಾತಾಪ. ಇನ್ನೊಂದೆಡೆ ಹೆತ್ತವರಿಂದ "ಎರಡೇ ತಿಂಗಳಿದೆ. ಇನ್ನಾದರು ಓದಿ ಪರೀಕ್ಷೆಯಲ್ಲಿ ಮಾರ್ಕ್ಸ್ ತೆಗಿ". ಟೀಚರ್ಸ್ನವರಿಗಂತೂ ಪೋರ್ಶನ್ ಮುಗಿಸುವ ತವಕ. ಇವೆಲ್ಲವುಗಳ ಮಧ್ಯೆ ವಿದ್ಯಾರ್ಥಿ ಅಪ್ಪಚ್ಚಿ.

ಶಾಲೆ ಸುರುವಾಗಿನಿಂದಲೇ ಓದುತ್ತಿರುವ ವಿದ್ಯಾರ್ಥಿಗಳಿಗೆ ಅಷ್ಟೇನೂ ತೊಂದರೆಯಾಗಲ್ಲ. ಆದರೆ ಕೊನೆಗಳಿಗೆಯ ವಿದ್ಯಾರ್ಥಿಗಳಿಗೆ ಇದು ಸಂಕಟದ ಸಮಯ. ಆದರೂ ಕಾಲ ಮಿಂಚಿಲ್ಲ. ಇರುವ ಎರಡು ತಿಂಗಳಾದರೂ ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಗಳಿಸಬಹುದು. ಈಗ ಇರುವ ಸಮಯವನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಒಂದು ವೆಳಾಪಟ್ಟಿಯನ್ನು ರೂಪಿಸಬೇಕು ಮತ್ತು ಅದರ ಪ್ರಕಾರ ಕ್ರಮಬದ್ದವಾಗಿ ಕಲಿಯಲು ಸುರುಮಾಡಬೇಕು. ವಿದ್ಯಾರ್ಥಿಗಳು ತಂದೆತಾಯಿ, ಗುರುಗಳ ಒತ್ತಡಕ್ಕೆ ಓದದೆ, ಕಲಿಯುವ ವಿಷಯದ ಬಗ್ಗೆ ಆಸಕ್ತಿ, ತಮ್ಮದೇ ಆದ ಗುರಿ ಹೊಂದಿದರೆ ಪರೀಕ್ಷೆಯನ್ನು ದೆರ್ಯವಾಗಿ ಎದುರಿಸಬಹುದು. ಕೆಲವೊಂದು ಮಕ್ಕಳಲ್ಲಿ ಪರೀಕ್ಷಾ ಸಮಯದಲ್ಲಿ ಮರೆವು ಜಾಸ್ತಿಯಾಗುತ್ತದೆ. ಇದಕ್ಕೆ ಕಾರಣ ಹಲವಾರು. ತಂದೆತಾಯಿಗಳ ಒತ್ತಡ, ಭಾವೋದ್ವೇಗ (ಸಿಟ್ಟು, ಹೆದರಿಕೆ, ಬೇಸರ, ಒಂಟಿತನ ಇತ್ಯಾದಿ), ಕೀಳರಿಮೆ, ಏಕಾಗ್ರತೆ ಇಲ್ಲದಿರುವುದು, ಕಲಿಯಲಿಕ್ಕೆ ತನ್ನಿಂದ ಆಗುವುದಿಲ್ಲ ಅನ್ನುವ ಮನೋಭಾವ, ಅತಿಯಾದ ನಿರೀಕ್ಷೆ, ಪುನರಾವರ್ತನೆ ಇಲ್ಲದಿರುವುದು, ದೈಹಿಕ ಹಾಗು ಮಾನಸಿಕ ಕಾರಣಗಳು ಹೀಗೆ ಇನ್ನೂ ಹಲವಾರು ಕಾರಣಗಳು ಇವೆ.

ನೆನಪನ್ನು ಯಾವ ರೀತಿ ಹೆಚ್ಚಿಸಬಹುದು? 
  • ಪಾಲಕರು ಮಕ್ಕಳಲ್ಲಿ ಹೆಚ್ಚಿನ ಒತ್ತಡವನ್ನು ಏರದೆ ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬಿಸಬೇಕು. "ಓದದಿದ್ದರೆ ಜೀವನ ವ್ಯರ್ಥ" ಅನ್ನುವ ಧೋರಣೆಗಿಂತ, ಜೀವನವೆಂದರೆ ಬರಿ ಓದು ಮಾತ್ರವಲ್ಲ, ಅನುತ್ತೀರ್ಣರಾದವರೂ ಕೂಡ ಜೀವನದಲ್ಲಿ ಯಶಸನ್ನು ಸಾದಿಸಿದ್ದಾರೆ ಅನ್ನುವುದನ್ನು ತಿಳಿಯಪಡಿಸಬೇಕು.
  • ಭಾವೊದ್ವೇಗಗಳನ್ನು ಯೋಗ,ವ್ಯಾಯಾಮ, ಒಳ್ಳೆ ಸ್ನೇಹಿತರ ಜೊತೆಗೆ ಮಾತುಕತೆ, ಅಷ್ಟೇ ಅಲ್ಲ ಮನಸನ್ನು ಬೇರೆ ಬೇರೆ ಕಾರ್ಯದಲ್ಲಿ ತೊಡಗಿಸುವುದರಿಂದ ಕಡಿಮೆ ಮಾಡಬಹುದು. 
  • ಅಂಕಗಳ ಬಗ್ಗೆ ಅತಿಯಾದ ನಿರೀಕ್ಷೆ ಮಾಡುವುದಕ್ಕಿಂತ, ನನ್ನಿಂದಾಗುವಷ್ಟು ಪ್ರಯತ್ನ ಮಾಡ್ತಾ ಇದ್ದೇನೆ ಅನ್ನುವ ಮನೋಭಾವವಿದ್ದರೆ ನೆನಪು ತನ್ನಿನ್ದಾಗಿಯೇ ಉಳಿಯುತ್ತದೆ. 
  •  ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಭಯ, ಆತಂಕ ಹೆಚ್ಚಾದರೆ ಆತ್ಮವಿಶ್ವಾಸ ಕುಂದಿ ಮರೆವು ಜಾಸ್ತಿಯಾಗುತ್ತದೆ. 
  • ಯಾವುದೇ ವಿಷಯ ಅರ್ಥವಾಗುವುದಿಲ್ಲ ಅನ್ನುವ ಪೂರ್ವ ಕಲ್ಪನೆ ಇದ್ದರೆ, ಅದರಿಂದ ಹೊರಗೆ ಬನ್ನಿ. ವಿಷಯದ ಬಗ್ಗೆ ಆಸಕ್ತಿ ಇಲ್ಲದಿರುವುದರಿಂದ ಆ ವಿಷಯ ಅರ್ಥವಾಗುವುದಿಲ್ಲ. ಅದರ ಬದಲು ಅರ್ಥವಾಗದ ವಿಷಯವನ್ನು ಗುರುಗಳಿಂದ, ಹಿರಿಯರಿಂದ ಪುನ್ಹ ಕೇಳಿಸಿಕೊಳ್ಳಿ. ಈಗೆ ಮಾಡುವುದರಿಂದ ವಿಷಯ ಅರ್ಥವಾಗಲು ಸುರುವಾಗುತ್ತದೆ. 
  • ಕೆಲವೊಮ್ಮೆ  ವಿದ್ಯಾರ್ಥಿಗಳು ಪಾಠದ ವಿಷಯಗಳಿಗಿಂತ, ಮೊಬೈಲ್, ಇಂಟರ್ನೆಟ್, ಫೇಸ್ ಬುಕ್, ಡಾನ್ಸ್ ,ಮೋಜು ಇವುಗಳ ಹಿಂದೆ ಬೀಳುವುದರಿಂದ ಅವರಲ್ಲಿ ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗಿ ಏಕಾಗ್ರತೆ ಇಲ್ಲದೆ ಹೋಗುತ್ತದೆ. ಪುಸ್ತಕ ಕೈಯಲ್ಲಿ ಹಿಡಿದರೂ ಕೂಡ ಮನಸ್ಸು ಮಾತ್ರ ಊರೆಲ್ಲ ಸುತ್ತುತ್ತದೆ. ಇಂತಹ   ವಿದ್ಯಾರ್ಥಿಗಳಿಗೆ ವಿಷಯ ಅರ್ಥವಾಗುವುದಿಲ್ಲ. ಇವೆಲ್ಲವೂ ತಾತ್ಕಾಲಿಕ ಸುಖ ನೀಡುವನ್ತದ್ದು. ಓದುವ ಸಮಯ ಈ ರೀತಿ ಹಾಳು ಮಾಡುವುದಕ್ಕಿಂತ ಓದಿನತ್ತ ನಮ್ಮ ಗುರಿ ಇಟ್ಟರೆ ಏಕಾಗ್ರತೆ ತನ್ನಿಂದ ತಾನೇ ಬರುತ್ತದೆ. ಮರೆವನ್ನು ದೂರ ಮಾಡಬಹುದು. 
  • ಇನ್ನೊಂದು ಮುಖ್ಯ ವಿಷಯವೆಂದರೆ ಓದಿದನ್ನು ಪುನರಾವರ್ತನೆ ಮಾಡುವುದು. ಓದಿದ ವಿಷಯಗಳನ್ನು ಆಗಾಗ ನೆನಪು ಮಾಡಿದಾಗ ನರಕೋಶಗಳು ಉತ್ತೇಜನದಿಂದ ಕೆಲಸ ಮಾಡುತ್ತವೆ. ಮನೋವಿಜ್ಞಾನದ ಪ್ರಕಾರ ಕೇವಲ ೨೦ ಪ್ರತಿಶತ ಮಾತ್ರ ಒಂದು ತಿಂಗಳ ನಂತರ ನೆನಪಿನಲ್ಲಿ ಉಳಿಯುತ್ತದೆ. ಅಷ್ಟೇ ಅಲ್ಲ ಯಾವ ವಿಷಯಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂಬುದನ್ನು  ವಿದ್ಯಾರ್ಥಿಗಳು ನಿರ್ದರಿಸಬೇಕು. ಹೆಚ್ಚಿನ  ವಿದ್ಯಾರ್ಥಿಗಳ ಸಮಯ ಅನಗತ್ಯ ವಿಷಯಗಳ ಮೇಲೆ ಕೇಂದ್ರಿಕ್ರತವಾಗಿರುವುದರಿಂದ ಅಗತ್ಯ ವಿಷಯಗಳು ನೆನಪಿನಿಂದ ಹಿಂದೆ ಸರಿಯುತ್ತವೆ. 
ಇನ್ನು ಕೂಡ ಹಲವಾರು ವಿಷಯಗಳು ಪರೀಕ್ಷಾ ತಯಾರಿ ಬಗ್ಗೆ ಇವೆ. ಅವನೆಲ್ಲ ಇನ್ನೊಮ್ಮೆ ಬರಿತ್ತೇನೆ. 

ಭಾನುವಾರ, ಜನವರಿ 30, 2011

ಹಣೆಬರಹ

ಕಾಲೇಜಿಗೆ ಹೋಗುತ್ತಿರುವ ನನ್ನ ಪರಿಚಯದ ಒಬ್ಬ ಹುಡುಗ  "ನಾನು ಎಷ್ಟು ಓದಿದರೂ ಕೂಡ ನನಗೆ ತಲೆಗೆ ಹತ್ತುವುದಿಲ್ಲ. ಇದು ನನ್ನ ಹಣೆಬರಹ. ಯಾರು ಏನು ಮಾಡಿದ್ರೂ ಸರಿಹೋಗುವುದಿಲ್ಲ" ಅಂತಾನೆ. ಇನ್ನೊಬ್ಬ ಪೋಷಕರು "ಈ ಮಕ್ಕಳ ಹಣೆಯಲ್ಲಿ ಏನು ಬರ್ದಿದೆಯೋ ಅದೇ ಆಗುವುದು. ಹಣೆಬರಹವನ್ನು ತಪ್ಪಿಸಲ್ಲಿಕ್ಕೆ ಆಗುವುದಿಲ್ಲ." ಅನ್ನೋವರು.  ಹಾಗೆಯೇ ಹೈಸ್ಕೂಲ್ನ ಟೀಚರ್ ಒಬ್ಬರು "ಮಕ್ಕಳು ಪಾಪ ಕಷ್ಟ ಪಟ್ಟು ಓದ್ತಾರೆ. ಅಂಕಪಟ್ಟಿ ಸಿಗುವಾಗ ಮಾತ್ರ ಎಲ್ಲಾ ಅದ್ರಷ್ಟದ ಮೇಲೆ ಅವಲಂಬಿರಿಸುತ್ತದೆ. ಕೆಲವು ವಿದ್ಯಾರ್ಥಿಗಳಿಗಂತೂ ದುರಾದೃಷ್ಟವೇ ತುಂಬಿದೆ. ಎಲ್ಲಾ  ಅವರವರ ಹಣೆಬರಹ". ಈ ಮಾತುಗಳನ್ನು ಮಕ್ಕಳ ಎದುರು ಹೇಳಿದರಂತೂ ಅದರ ಪ್ರಭಾವ ಅವರ ಮೇಲೆ ತುಂಬಾ ಗಾಡವಾಗಿ ಪರಿಣಮಿಸಬಹುದು. ನೀವು ಕೂಡ ಹಲವಾರು ಸಲ ಈ ಹಣೆಬರಹದ ಬಗ್ಗೆ ಮಾತನಾಡಿರಬಹುದು, ಕೇಳಿರಬಹುದು.    

ಹಣೆಬರಹ ಅನ್ನುವಂತದ್ದು ಏನು? ಯಾರು ಮಾಡಿದ್ದು?  ಕೆಲವೊಮ್ಮೆ ನನಗೆ ಅನಿಸಿದ್ದು ಉಂಟು ಈ ಹಣೆಬರಹ ಅನ್ನುವುದು ನಾವು  ಹುಟ್ಟಿದಾಗ ಇರಲಿಲ್ಲ. ಆದರೆ ನಾವು ಬೆಳಿತಾ ಬೆಳಿತಾ ಅದೇಗೆ ನಮಗೆ ಅಂಟುರೋಗದ ಹಾಗೆ  ಅಂಟಿಕೊಂಡಿದೆ  ಅಂಥಾ? ಇದೊಂದು ನಾವೇ ಬೆಳೆಸಿದಂತಹ ಮನಸ್ಸಿನ ಪಟ್ಟಿ. ಸಣ್ಣವರಿರುವಾಗ ತಂದೆತಾಯಿಗಳಿಂದ, ನಮ್ಮನ್ನು ಪೋಷಿಸುವವರಿಂದ, ಶಾಲಾಶಿಕ್ಷಕರಿಂದ, ಬಂದುಬಳಗ, ನೆರೆಕೆರೆಯವರಿಂದ ಈಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಒಮ್ಮೆ ಮಕ್ಕಳ ಮನಸ್ಸಿನಲ್ಲಿ ಈ ವಿಷಯ ಸ್ಥಿರವಾಯಿತೆಂದರೆ ಮುಂದೆ ದೊಡ್ಡವರಾಗುತ್ತಾ ಇನ್ನೂ ಕೂಡ ಬಲಿತು ದೃಡವಾಗುತ್ತದೆ. ಮುಂದೆ ಇದನ್ನು ಮನಸ್ಸಿನಿಂದ ತೆಗೆದು ಹಾಕಲು ಕಷ್ಟಪಡಬೇಕಾಗುತ್ತದೆ. ಇದರಿಂದಾಗಿ ಮಾನಸಿಕ ಕಾಯಿಲೆಗೆ ಒಳಗಾಗುವ ಜನ ಕೂಡ ತುಂಬಾ ಇದ್ದಾರೆ. ಮಕ್ಕಳು ಸಣ್ಣ ಇರುವಾಗಲೇ ಈ ತರಹದ ಹಣೆಬರಹದ ಪಟ್ಟಿಯನ್ನು ಅವರ ಮೇಲೆ ಹಾಕದಿರುವುದು ಉತ್ತಮ. ಇದರ ಬದಲು ಸಕಾರಾತ್ಮಕ ಚಿಂತನೆ, ದ್ದೆರ್ಯ, ಆತ್ಮ ವಿಶ್ವಾಸ ಮುಂತಾದವುಗಳನ್ನು ಮಕ್ಕಳಲ್ಲಿ ಅಳವಡಿಸಿಕೊಂಡರೆ ಮುಂದೊಂದು ದಿನ ಆ ಮಕ್ಕಳು ಜಗತ್ತಿಗೆ ಶೇಷ್ಟವಾಗುವುದರಲ್ಲಿ ಆಶ್ಚರ್ಯವೇನಿಲ್ಲ. .  



ಗುರುವಾರ, ಜನವರಿ 27, 2011

MANADHANGALA: ಅಜ್ಜ ಅಜ್ಜಿಯ ಸವಿನೆನಪಲ್ಲಿ....

MANADHANGALA: ಅಜ್ಜ ಅಜ್ಜಿಯ ಸವಿನೆನಪಲ್ಲಿ....: "ಉಡುಪಿಯಿಂದ ೧೦-೧೨ ಕಿಲೋಮೀಟರು ದೂರದಲ್ಲಿ ಕೆಮ್ಮಣ್ಣು ಎಂಬ ಹಳ್ಳಿ ಇದೆ. ಆ ಹಳ್ಳಿಯ ಒಂದು ಬದಿಯಲ್ಲಿ ಸ್ವರ್ಣ ನದಿ ಹರಿಯುತ್ತದೆ. ಇನ್ನೊಂದು ಬದಿಯಲ್ಲಿ ಅರಬ್ಬೀ ಸಮುದ್ರ. ಈ..."

ಅಜ್ಜ ಅಜ್ಜಿಯ ಸವಿನೆನಪಲ್ಲಿ....

ಉಡುಪಿಯಿಂದ ೧೦-೧೨ ಕಿಲೋಮೀಟರು ದೂರದಲ್ಲಿ ಕೆಮ್ಮಣ್ಣು ಎಂಬ ಹಳ್ಳಿ ಇದೆ. ಆ ಹಳ್ಳಿಯ ಒಂದು ಬದಿಯಲ್ಲಿ ಸ್ವರ್ಣ ನದಿ ಹರಿಯುತ್ತದೆ. ಇನ್ನೊಂದು ಬದಿಯಲ್ಲಿ ಅರಬ್ಬೀ ಸಮುದ್ರ. ಈ ಸ್ವರ್ಣ ನದಿಯ ಮಧ್ಯ ಭಾಗದಲ್ಲಿ ಕೆಲವು ದ್ವೀಪಗಳಿವೆ. ಅಂತಹ ಒಂದು ದ್ವೀಪದಲ್ಲಿ ನನ್ನ ಅಜ್ಜ ಅಜ್ಜಿ ವಾಸಿಸುತ್ತಿದ್ದರು. ಈ ದ್ವೀಪದ ಸುತ್ತಮುತ್ತ ಎಲ್ಲಿ ನೋಡಿದರೂ ತೆಂಗಿನ ಮರಗಳೇ ಕಾಣ್ತವೆ. ರಜೆ ಸಿಕ್ಕಿದ ಕೂಡಲೇ ಅಜ್ಜ ನಮ್ಮನ್ನು ಕರೆದುಕೊಂಡು ಹೋಗಲ್ಲಿಕ್ಕೆ ಬರುತ್ತಿದ್ದರು. ಬಸ್ಸಿನಿಂದ ಇಳಿದ ಕೂಡಲೇ ತುಂಬಾ ನದಿಯಲ್ಲಿಕ್ಕೆ ಉಂಟು. ದಾರಿ ಉದ್ದಕ್ಕೂ ಬೆಲ್ಲದ ಕ್ಯಾಂಡಿ, ಅಕರುಟ್ ಮುಂತಾದವುಗಳನ್ನು ತೆಗೆಸಿ ಕೊಡುತಿದ್ದರು. ಅದನ್ನು ತಿನ್ನುತಾ ದಾರಿ ಸಾಗಿದ್ದೆ ಗೊತ್ತಗುತಿರಲ್ಲಿಲ್ಲ. ನದಿ ತೀರದಲ್ಲಿ ಅಜ್ಜನ ದೋಣಿ ನಮಗಾಗಿ ಕಾದಿರುತ್ತಿತ್ತು. ಅದರಲ್ಲಿ ಕೂತುಕೊಂಡು ಹೊಳೆದಾಟಿ ಅಜ್ಜಿ ಮನೆಗೆ ತಲುಪುತಿದ್ದೆವು.

ಅಜ್ಜಿ ಮನೆಯಲ್ಲಿ ಮಕ್ಕಳ ಒಂದು ಗುಂಪೇ ಇರುತ್ತಿತ್ತು. ಆ ದ್ವೀಪದಲ್ಲಿ ಅದೊಂದೇ ಮನೆಯಲ್ಲ. ಅಂತಹ ೪-೫ ಮನೆಗಳು ಇವೆ. ಅಲ್ಲಿಯ ಮಕ್ಕಳು ಕೂಡ ಆಟ ಆಡಲು ಸೇರುತ್ತಿದ್ದರು. ಬೆಳಗಿನ ತಿಂಡಿಯ ನಂತರ ನಾವೆಲ್ಲಾ ಆಡಲ್ಲಿಕ್ಕೆ ಸುರು. ಮನೆಯ ಎದುರು ಭಾಗದಲ್ಲಿ ಉದ್ದನೆಯ ತೋಡು. ನದಿ ನೀರು ಇದರಲ್ಲಿ ಸೇರುತ್ತಿತ್ತು.  ತೋಡು ದಾಟಿ ಹೋಗಲು ತೆಂಗಿನ ಮರವನ್ನು ಕತ್ತರಿಸಿ ಬ್ರಿಡ್ಜ್ ತರಹ ಇಟ್ಟಿದ್ದರು. ಅಂತಹ ೨ ತೋಡು  ದಾಟಿದ ನಂತರ ನಾವೆಲ್ಲಾ ಆಟ ಆಡುವ ಜಾಗ ಸಿಗ್ತ್ತದೆ. ತೋಡಿನ ಒಂದು ಬದಿಯಲ್ಲಿ ಹೊಂಗೆ ಮರಗಳ ಸಾಲಿದೆ. ಈ ಹೊಂಗೆ ಮರಗಳ ಬುಡದಲ್ಲೇ ನಮ್ಮ ಮನೆ ಆಟ ಆಡ್ತ್ತಿದ್ದೆವು. ಕಲ್ಲುಗಳನ್ನು ಸೇರಿಸಿ ಓಲೆ ಸಿದ್ದವಾಗುತ್ತಿತ್ತು. ತೋಟದಲ್ಲಿ ಸಿಗುವ ಮಾವಿನ ಕಾಯಿಗಳನ್ನು ತಂದು ಕತ್ತರಿಸಿ ಉಪ್ಪು ಖಾರ ಬೆರೆಸಿ ಉಪ್ಪಿನ ಕಾಯಿ ಸಿದ್ದ. ಅದನ್ನು ಹೊಂಗೆ ಎಲೆಯಲ್ಲಿ ಹಂಚಿ ಮರದ ಮೇಲೆ ಕೂತುಕೊಂಡು ಚಪ್ಪರಿಸಿ ತಿನ್ನುತ್ತಿದ್ದೆವು.

ನದಿಯಲ್ಲಿ ನೀರು ಕಡಿಮೆ ಆದಾಗ ಅಲ್ಲಲ್ಲಿ ಮರಳು ಕಾಣಿಸ್ತದೆ. ನಾವೆಲ್ಲಾ ಅಲ್ಲಿಗೆ ಹೋಗಿ ಬಕೆಟ್ ತುಂಬಾ ಮಾರುವಾಯಿ ತುಂಬಿಸಿ ತರುತ್ತಿದ್ದೆವು. ಅಜ್ಜಿ ಅದರಿಂದ ಮರುವಾಯಿ ಸುಕ್ಕ ತಯಾರು ಮಾಡುತ್ತಿದ್ದರು. ಮಕ್ಕಳೆಲ್ಲ ಅದನ್ನೇ ತಟ್ಟೆಯಲ್ಲಿ ತುಂಬಿಸಿ ತಿನ್ನುತ್ತಿದ್ದೆವು. ಸಾಯಂಕಾಲವಾಗ್ತಲೇ ನದಿ ತೀರದಲ್ಲಿ ಅಡ್ಡವಾಗಿ ಬೆಳೆದ ತೆಂಗಿನ ಮರ ಹತ್ತಿ ನದಿಯಲ್ಲಿ ಸಾಗುವ ದೋಣಿಗಳನ್ನು ನೋಡುತ್ತಾ ಕಾಲ ಸಾಗುತ್ತಿತ್ತು. ಹುಡುಗರೆಲ್ಲ ಗಾಳಕ್ಕೆ ಎರೆ ಹುಳ ಸಿಕ್ಕಿಸಿ ಮೀನು ಹಿಡಿಯುತ್ತಿದ್ದರು. ರಜೆ ಮುಗಿದದ್ದೇ ಗೊತ್ತಾಗುತ್ತಿರಲಿಲ್ಲ.
ಅಜ್ಜನ ಮನೆಯಲ್ಲಿ ಕಳೆದಂತಹ ಸವಿ ನೆನಪುಗಳು ಮಾತ್ರ ಯಾವತ್ತು ಮಾಸುವುದಿಲ್ಲ.